ಆತ್ಮೀಯ ಸ್ಪರ್ಧಾ ಮಿತ್ರರೆ, ಬದುಕಿನ ಬವಣೆಯ ನೆನೆದು ನಾನು ಯಾವುದಕ್ಕೂ ಬರ | Kannada Literature | ಕನ್ನಡ ಸಾಹಿತ್ಯ
ಆತ್ಮೀಯ ಸ್ಪರ್ಧಾ ಮಿತ್ರರೆ,
ಬದುಕಿನ ಬವಣೆಯ ನೆನೆದು ನಾನು ಯಾವುದಕ್ಕೂ ಬರದವನೆಂದು ಬರಸಿಡಿಲು ಬಡಿದಂತೆ ಬದುಕುವುದಕ್ಕಿಂತ, ಬರುವುದೆಲ್ಲವೂ ಬರಲಿ ಬದುಕಿ ತೋರುವೆನೆಂಬ ಭರವಸೆಯ ಹೊತ್ತು ಬೆವರು ಸುರಿಸುತ ಮುಂದೆ ಸಾಗಿದರೆ ಬದುಕು ಹಸನಾಗದೆ? ಕನಸು ನನಸಾಗದೆ? ಮನಸು ಹಸಿರಾಗದೆ? ಸೋಲುವ ಭಯವು ಹುಸಿಯಾಗದೆ? ಯೋಚಿಸಿ.
ಈ ನಿಮ್ಮ ಗೆಲುವಿನ ಹಾದಿಗೆ ತಮ್ಮದೊಂದು ಪುಟ್ಟ ಕಾಣಿಕೆಯಾಗಿ "ಜ್ಞಾನ ದರ್ಶನ" ಸಂಸ್ಥೆಯು ಆರಂಭಿಸಿದ "ಅಕ್ಷರ ದಾಸೋಹ" ಮಾಸಪತ್ರಿಕೆಯ "ಏಪ್ರಿಲ್ 2022" ರ ಸಂಚಿಕೆಯನ್ನು ತಮಗರ್ಪಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ, ಸರ್ವರಿಗೂ ಒಳಿತಾಗಲೆಂದು ಹಾರೈಸುವ.
- ಅಕ್ಷರ ದಾಸೋಹ ಪತ್ರಿಕಾ ತಂಡ.