Get Mystery Box with random crypto!

ಯಾಗಿದೆ ಹಾಗೂ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವು ಮಹಿಳೆಯರಿಗೆ ಮತ್ತು ಅ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

ಯಾಗಿದೆ ಹಾಗೂ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವು ಮಹಿಳೆಯರಿಗೆ ಮತ್ತು ಅತ್ಯಂತ ಹಿಂದುಳಿದ ಕುಟುಂಬಗಳಿಗೆ ವಿಶೇಷವಾಗಿ ತಗಲಿದೆ ಎನ್ನುತ್ತದೆ ವರದಿ. ಇದರಿಂದ ಹೆಚ್ಚಿನ ಅಂಚಿನ ಜನರು ಆಹಾರ ಅಭದ್ರತೆ ಮತ್ತು ಬಡತನಕ್ಕೆ ಗುರಿಯಾಗುತ್ತಾರೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ಕೊರೋನದಿಂದ ನಿರುದ್ಯೋಗದ ದರ ಸಹ ಹೆಚ್ಚಾಗುವ ಸೂಚನೆಯನ್ನು ವರದಿ ನೀಡಿದೆ. ಕೊಂಚ ಸಮಾಧಾನದ ವಿಚಾರವೆಂದರೆ ವಿಶ್ವ ಬ್ಯಾಂಕಿನ ವಾರ್ಷಿಕ ಮಾನವ ಬಂಡವಾಳ ಸೂಚ್ಯಂಕದ ಇತ್ತೀಚಿನ ಆವೃತ್ತಿಯಲ್ಲಿ ಭಾರತವು 116 ನೇ ಸ್ಥಾನದಲ್ಲಿದೆ. ಇದು ದೇಶಾದ್ಯಂತ ಮಾನವ ಬಂಡವಾಳ ಅಳೆಯುವ ಪ್ರಮುಖ ಮಾನದಂಡವಾಗಿದೆ. ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ ಮಾನವ ಬಂಡವಾಳ ಸೂಚ್ಯಂಕದ ವರದಿಯ ಪ್ರಕಾರ ಭಾರತದ ಅಂಕ 2018ರಲ್ಲಿ 0.44ರಿಂದ ಸದ್ಯ 0.49ಕ್ಕೆ ಏರಿದೆ.

ಭಾರತದಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಭದ್ರತೆ ಮತ್ತು ಭೂಮಿಯ ಮಾಲಕತ್ವವು ಮಹಿಳೆಯರ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಲಿಂಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವರದಿ ಹೇಳುತ್ತದೆ. ಲಿಂಗ ಆಧಾರಿತ ಹಿಂಸೆ ಮತ್ತು ಆಸ್ತಿಯ ಮೇಲಿನ ಹಕ್ಕು ಗ್ರಾಮೀಣ ಮಹಿಳೆಯರನ್ನು ಹೆಚ್ಚು ಸಬಲೀಕರಣಗೊಳಿಸುತ್ತದೆ ಎಂದು ವರದಿ ಸೂಚಿಸುತ್ತದೆ. ಭಾರತದಲ್ಲಿ ಪೋಷಕರು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದರಿಂದ ಹುಡುಗಿಯರಲ್ಲಿ ಅಪೌಷ್ಟಿಕತೆ ಕಡಿಮೆಯಾಗುತ್ತದೆ ಮತ್ತು ಸ್ತ್ರೀ ಸಬಲೀಕರಣ ಹೆಚ್ಚಾಗುತ್ತದೆ. ಚುನಾಯಿತ ಸ್ಥಳೀಯ ಸರಕಾರಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಾತಿನಿಧ್ಯವನ್ನು ಹೊಂದಿರುವ ದೇಶಗಳ ಮೊದಲ ಮೂರನೇ ಗುಂಪಿನಲ್ಲಿ ಭಾರತ ಕಾಣಿಸಿಕೊಂಡಿದೆ ಮತ್ತು ದೇಶದ ಕೇವಲ 13.5ರಷ್ಟು ಮಹಿಳೆಯರು ಮಾತ್ರ ಸಂಸತ್ತಿನಲ್ಲಿ ಸ್ಥಾನಗಳನ್ನು ಪಡೆದಿದ್ದಾರೆ ಎಂದು ವರದಿ ವಿಷಾದಿಸುತ್ತದೆ.

ಈ ವರದಿ ಮೊದಲ ಬಾರಿಗೆ ಪ್ರತಿ ದೇಶಗಳ ಅಲ್ಲಿನ ಪರಿಸರದ ಒತ್ತಡವನ್ನು ಅಂದಾಜು ಮಾಡಿದೆ ಮತ್ತು ಭೂಮಿಯ ಒತ್ತಡಗಳನ್ನು ಸರಿಹೊಂದಿಸಿದ ಮಾನವ ಅಭಿವೃದ್ಧಿ ಸೂಚ್ಯಂಕವನ್ನು (ಪಿಎಚ್‌ಡಿಐ) ಸಿದ್ಧಪಡಿಸಲಾಗಿದೆ. ಇದು ಪರಿಸರ ಸ್ನೇಹಿ ಮಾನವ ಅಭಿವೃದ್ಧಿಯ ಬಗ್ಗೆ ಸ್ವಲ್ಪಸ್ಪಷ್ಟವಾದ ಚಿತ್ರವನ್ನು ನೀಡುತ್ತದೆ ಮತ್ತು ಉತ್ತಮ ಪರಿಸರಕ್ಕೆ ಇರುವ ಬೆದರಿಕೆಗಳ ಕುರಿತು ನಮ್ಮ ಗಮನ ಸೆಳೆೆಯುತ್ತದೆ. ಪರಿಸರ ಕುರಿತ ಕೆಂಪು ಪಟ್ಟಿ ಸೂಚ್ಯಂಕದಲ್ಲಿ ಭಾರತ 0.676 ಅಂಕಗಳನ್ನು ಗಳಿಸಿದೆ. ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಸೂಚ್ಯಂಕ ಸ್ಕೋರ್ ಭಾರತದಲ್ಲಿ 0.972ರಷ್ಟು ಇದ್ದು ಇಂಗಾಲ ಹೆಜ್ಜೆ ಗುರುತು ಸೂಚ್ಯಂಕ ಸ್ಕೋರ್ 0.970 ಇರುವುದರಿಂದ ಹೆಚ್ಚಿನ ಸುಧಾರಣೆಯ ಅಗತ್ಯವಿದೆ ಎನ್ನುತ್ತದೆ ವರದಿ. ಈ ವಿಷಯದಲ್ಲಿ ಭಾರತದ ಕಾರ್ಯಕ್ಷಮತೆ ಸ್ವಲ್ಪಉತ್ತಮವಾಗಿದ್ದರೂ ಪರಿಸರ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸುವ ಹಾದಿಯಲ್ಲಿ ದೇಶ ಇನ್ನು ಹಲವಾರು ಮೈಲುಗಳಷ್ಟು ದೂರದಲ್ಲಿದೆ ಎನ್ನುತ್ತದೆ ವರದಿ. ಈ ವರದಿ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಮಾಡಿದ ಕೆಲವು ಬದ್ಧತೆ ಮತ್ತು ಕಟ್ಟುಪಾಡುಗಳನ್ನು ಸ್ವಲ್ಪಮಟ್ಟಿಗೆ ಭಾರತ ಪಾಲಿಸಿದೆ ಎನ್ನುತ್ತದೆ. ಹವಾಮಾನ ಬದಲಾವಣೆಯೊಂದಿಗೆ ಸಂಬಂಧ ಹೊಂದಿದ ಪರಿಣಾಮವಾಗಿ ದುರ್ಬಲ ಉದ್ಯೋಗದಲ್ಲಿರುವ ಶೇಕಡಾವಾರು ವಿಚಾರದಲ್ಲಿ ದೇಶವು ಮೂರನೇ ಸ್ಥಾನದಲ್ಲಿದೆ. ವರದಿ ಪ್ರಕಾರ ಸೌರ ಸಾಮರ್ಥ್ಯ ಬಳಕೆಯ ವಿಚಾರದಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.

ನಮ್ಮ ಸರಕಾರ ಮತ್ತು ನೀತಿ ನಿರೂಪಕರು ಹವಾಮಾನ ಬದಲಾವಣೆಯ ಪರಿಣಾಮ ಉಂಟಾಗುವ ತಾಪಮಾನ, ಪ್ರವಾಹ, ತೀವ್ರ ನೀರಿನ ಕೊರತೆ, ಕೃಷಿ ವೈಫಲ್ಯ ಇದರ ಕುರಿತಾಗಿ ತುರ್ತು ಗಮನವಹಿಸಬೇಕೆಂದು ವರದಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಸುಸ್ಥಿರ, ಅಂತರ್ಗತ ಚೇತರಿಕೆ ಮತ್ತು ಅಂಚಿನ ಜನಗಳ ಒಳಗೊಳ್ಳುವಿಕೆಯ ಬೆಳವಣಿಗೆಗೆ ಅಡಿಪಾಯ ಹಾಕಲು ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಭಾರತ ಹೆಚ್ಚಿನ ಹೂಡಿಕೆ ಮಾಡುವುದು ಅತ್ಯಗತ್ಯ ಎನ್ನುತ್ತದೆ ವರದಿ. ಕೊರೋನ ಸಾಂಕ್ರಾಮಿಕ ಪ್ರಭಾವದಿಂದಾಗಿ, ದೇಶದಲ್ಲಿ 1 ಬಿಲಿಯನ್‌ಗಿಂತ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು ಸರಾಸರಿ ಅರ್ಧ ವಷರ್ದ ಶಾಲಾ ಶಿಕ್ಷಣವನ್ನು ಕಳೆದುಕೊಳ್ಳಬಹುದು, ಅಲ್ಲದೇ ಸಾಕಷ್ಟು ವಿತ್ತೀಯ ನಷ್ಟಗಳಿಗೆ ದೇಶ ಸಿದ್ಧವಾಗಬೇಕಿದೆ ಎನ್ನುತ್ತದೆ ವರದಿ. ಮಹಿಳೆಯರು ಮತ್ತು ಮಕ್ಕಳಿಗೆ ಅಗತ್ಯವಾದ ಆರೋಗ್ಯ ಸೇವೆಗಳಿಗೆ ಇರುವ ಗಮನಾರ್ಹವಾದ ಅಡೆತಡೆಗಳನ್ನು ದೇಶ ತೆಗೆದುಹಾಕಬೇಕಿದೆ. ಅಲ್ಲದೆ ಅನೇಕ ಬಡಮಕ್ಕಳು ನಿರ್ಣಾಯಕ ವ್ಯಾಕ್ಸಿನೇಷನ್‌ಗಳನ್ನು ಪಡೆಯುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ಅಭಿಪ್ರಾಯ ಪಡುತ್ತದೆ.

ಅಂತಿಮವಾಗಿ ಈಗ ನಾವು ಏನು ಮಾಡಬೇಕು? ನಮ್ಮ ದೇಶದ ನೀತಿ ನಿರೂಪಣಾ ವಿಧಾನಗಳಲ್ಲಿ ಬಡತನ, ಪರಿಸರ ನ್ಯಾಯ, ಬಹುತ್ವ, ಒಳಗೊಳ್ಳುವಿಕೆ ಇವುಗಳು ಸಂಪೂರ್ಣ ಕಾಣೆಯಾಗಿವೆ ಎಂದು ವರದಿಯು ಗಮನಿಸಿದೆ. ಸಮರ್ಥನೀಯ ಮಟ್ಟದಲ್ಲಿ ಅಸಮತೋಲನವನ್ನು ಉಂಟು ಮಾಡುವ ನೀತಿ ನಿರೂಪಣೆಗಳನ್ನು ಯೋಜನೆಯಿಂದ ಕೈ ಬಿಡಲು ವರದಿ ಸೂಚಿಸುತ್ತದೆ. ಉತ್ಪಾದನಾ ಸಾಧನಗಳ ಮೇಲಿನ ನಿಯಂತ್ರಣವನ್ನು ಅಂಚಿನ ಸಮುದಾಯಗಳಿಗೆ ವರ್ಗಾಯಿಸಿದಾಗ ಆ ಸಮುದಾಯ ಸಬಲೀಕರಣ ಪಡೆಯಲು ಸಾಧ್ಯ ಮತ್ತು ಪರಿಸರ ಸ್ನೇಹಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಮತ್ತಷ್ಟು ವಿಕೇಂದ್ರೀಕರಣಗೊಳಿಸಲು ನಿರ್ದಿಷ್ಟವಾಗಿ ವರದಿಯಲ್ಲಿ ಉಲ್ಲೇಖಿಸ ಲಾಗಿದೆ. ಇದರಿಂದ ದೇಶದಲ್ಲಿ ಹೆಚ್ಚು ಒಳಗೊಳ್ಳುವಿಕೆಯ ಬೆಳವಣಿಗೆಗೆ ಕಾರಣವಾಗಬಹುದು. ಇದಲ್ಲದೆ, ಪಾರದರ್ಶಕತೆ ಉತ್ತರದಾಯಿತ್ವ, ಭಾಗವಹಿಸುವಿಕೆ ಇತ್ಯಾದಿ ಭಾರತದ ಆಡಳಿತದಲ್ಲಿ ಅಳವಡಿಸಿಕೊಳ್ಳುವಿಕೆಯ ಅಗತ್ಯತೆಯನ್ನು ಹೇಳುವುದಕ್ಕೆ ವರದಿ ಮರೆತಿಲ್ಲ.
(‘ವಾರ್ತಾ ಭಾರತಿ’)
#HDI #UNDP #report #internationalReports #info @spardhaloka