Get Mystery Box with random crypto!

ದೇಶದಲ್ಲಿನ ರೈತರ ಸಂಕಷ್ಟಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಇಲ್ಲಿ ಹಲವು | 'ಸ್ಪರ್ಧಾಲೋಕ'-'IAS/KAS..in ಕನ್ನಡ'

ದೇಶದಲ್ಲಿನ ರೈತರ ಸಂಕಷ್ಟಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಇಲ್ಲಿ ಹಲವು ಸಂಗತಿಗಳು ಕೆಲಸ ಮಾಡುತ್ತಿವೆ. ಅನಕ್ಷರತೆ, ಗ್ರಾಮೀಣ ಪ್ರದೇಶಗಳಲ್ಲಿನ ಶೋಷಣೆ, ರೈತರನ್ನು ಬ್ಯಾಂಕ್‌ಗಳು ಶೋಷಿಸುವುದು, ರಾಜಕೀಯ ಭ್ರಷ್ಟಾಚಾರ, ಕೃಷಿಯೋಗ್ಯ ಭೂಮಿ ಹಂಚಿ ಹೋಗುತ್ತಿರುವುದು, ತಂಬಾಕು ಮತ್ತು ಮದ್ಯದಿಂದ ಬರುತ್ತಿರುವ ಕಾಯಿಲೆಗಳು, ಹಣದುಬ್ಬರ, ವಿದ್ಯುತ್ ಲಭ್ಯತೆ ಸರಿಯಾಗಿಲ್ಲದಿರುವುದು... ಇವೆಲ್ಲವೂ ರೈತರ ಸಂಕಷ್ಟಕ್ಕೆ ಕೊಡುಗೆ ನೀಡುತ್ತಿವೆ. ಹೊಸ ಕಾಯ್ದೆ ಜಾರಿಗೊಳಿಸುವುದರಿಂದ ಇವನ್ನೆಲ್ಲ ಇಲ್ಲವಾಗಿಸಲು ಸಾಧ್ಯವಿಲ್ಲ.

ಮೋದಿ ನೇತೃತ್ವದ ಸರ್ಕಾರವು ಈ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಸಂಸತ್ತನ್ನು ಕೋರಬೇಕು. ನಂತರ, ಬಿಜೆಪಿ ಆಡಳಿತ ಇರುವ ರಾಜ್ಯಗಳು ಈ ಬಗೆಯ ಕಾಯ್ದೆಗಳನ್ನು ಜಾರಿಗೆ ತಂದು, ತಳಮಟ್ಟದಲ್ಲಿ ಸುಧಾರಣೆ ತಂದು ತೋರಿಸುವಂತೆ ಹೇಳಬೇಕು. ಮೋದಿ ಅವರು ಮಾಡುತ್ತಿರುವುದರ ವಿರುದ್ಧ ಹೋರಾಡಲು ಬಹುತೇಕ ವಿರೋಧ ಪಕ್ಷಗಳಿಗೆ ನೈತಿಕ ಹಕ್ಕಿಲ್ಲ. ಅವು ಕೂಡ ಈ ಹಿಂದೆ ಇಂಥದ್ದೇ ಕಾನೂನುಗಳನ್ನು ಕೇಂದ್ರ ಜಾರಿಗೆ ತರಬೇಕು ಎಂದು ಕೇಳಿದ್ದವು.

ಭಾರತದ ರೈತರ ಸಂಕಷ್ಟಗಳು ಅದೆಷ್ಟು ಬೃಹತ್ ಆಗಿವೆ ಅಂದರೆ, ರಾಜ್ಯ ಅಥವಾ ಕೇಂದ್ರ ಜಾರಿಗೆ ತರುವ ಯಾವುದೇ ಕಾನೂನು ಆ ಸಂಕಷ್ಟಗಳನ್ನು ತೃಪ್ತಿಕರವಾಗಿ ನಿಭಾಯಿಸಲು ಆಗದ ಪರಿಸ್ಥಿತಿ ಇದೆ. ಇಂತಹ ಮಾತು ಆಡಲು ವಿಷಾದವಾಗುತ್ತದೆ ಕೂಡ...

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ
#editorial #farmer #inNews #kas2021 #ias2021 #generalStudies @spardhaloka